Monday, February 4, 2008

ಸಮಾಧಾನ

ತಂಗಿ: ಓ ನೊಂದ ಮನಸೆ... ಕಾಣದ ಕೋಗಿಲೆಯಾ ಹುಡುಕುವೆ ಏಕೆ?
ನಿನಾಗು ಮಾಮರದ ಚಿಗುರು. ಹಸಿರು ನೆನಪೇ ಅದರ ಉಸಿರು...

ಅಣ್ಣ: ಕೋಗಿಲೆಯ ಕೂಗು ನನ್ನ ಮನಸೆಳೆದಿದೆ... ಮಾಮರದ ಚಿಗುರೇ ಅದಕ್ಕೆ ಬೇಡವಾಗಿದೆ!
ಇನ್ನು ಉಸಿರಾಗುವ ಹಸಿರಿನ ಮಾತೆಲ್ಲಿ, ಹಸಿರು ನಿಂತ ಉಸಿರಗಿದೆ...

ತಂಗಿ: ಸಿಗದ ಕೋಗಿಲೆಯ ಬಗ್ಗೆ ಏಕೆ ಹಂಬಲಿಕೆ, ಜೀವನದಲಿ ಸಹಜ ಅಗಲಿಕೆ...
ಚಂದ್ರ ಎಲ್ಲರಿಗು ಸಿಗಲರ, ಸಿಗುವನು ಬೆಳದಿಂಗಳಾಗಿ...
ಅಮವಾಸೆ ಎಂದು ಅತ್ತರೆ, ಮರೆಯಗುವುದು ಮಿನುಗುವ ತಾರೆ...

ಅಣ್ಣ: ಅಮವಾಸೆಯ ರಾತ್ರಿ ಮಿನುಗುವ ತಾರೆಯೇ ಮರೆಯಾದರೆ, ಹುಣ್ಣಿಮೆಯ ಚಂದಿರ ನಗುವನು ನನ್ನ ನೋಡಿ...
ಬಿರುಗಾಳಿಯ ದಟ್ಟ ಮಳೆಯಲ್ಲಿ ಬಂದ ಸಿಡಿಲು, ಮರೆಮಾಡಿದೆ ನನ್ನ ಹಾದಿಯ...

ಅಣ್ಣ: ಮನಸಿನ ಮಾತನ್ನರಿತು ನನ್ನ ಮನಸಿನ ಮೌನ ಮುರಿದ ಮತ್ತೊಂದು ಮನಸಿಗೆ,
ಈ ಪುಟ್ಟ ಮನಸಿನ ಮನಸ್ಪುರ್ವಕ ಧನ್ಯವಾದಗಳು...

- ತಂಗಿ ಮತ್ತು ಅಣ್ಣ